ಮಂಜುಳ ಗಾನ ಅತಿ ಮಧುರ! ಈಗಂತೂ ಖ್ಯಾತ ಗಾಯಕಿ ಮಂಜುಳ ಗುರುರಾಜ್ ಅವರು ವಿರಳ. ಸುರೇಶ್ ಆರ್ಟ್ಸ್ ‘ಶ್ರಾವಣಿ ಸುಬ್ರಮಣ್ಯ’ ಅಮೋಘ ಗಾಯಕಿಯನ್ನು ಮತ್ತೆ ವಾಪಸ್ಸು ಕರೆತಂದಿದೆ.
‘ಕುಡಿದ್ರೆ ತಲೆ ದಿಂ ಅನ್ನಬೇಕು, ಮೈಯೆಲ್ಲಾ ಜುಂ ಅನ್ನಬೇಕು, ಫ್ರೆಂಡು ಒಳಗೆ ಸೇರಿದರೆ ಗುಂಡು ನೀನೆಂತ ಗಂಡು.... ಮಂಜುಳ ಗುರುರಾಜ್ ಅವರು ಈ ಹಾಡನ್ನು ಸಾಧನ ಸ್ಟುಡಿಯೋದಲ್ಲಿ ಧ್ವನಿ ಗೂಡಿಸಿದ್ದಾರೆ. ವಿ ಹರಿಕೃಷ್ಣ ಅವರ ಸಂಗೀತದಲ್ಲಿ ಇದೆ ಮೊದಲು ಮಂಜುಳ ಗುರುರಾಜ್ ಅವರು ಹಾಡಿರುವುದು. ಅಂದು ಒಳಗೆ ಸೇರಿದರೆ ಗುಂಡು....ಹಾಡನ್ನು ಹಾಡಿದ ಮಂಜುಳ ಅವರು ಇಂದು ಆ ಹಾಡಿನ ಸಾಲನ್ನು ಇಲ್ಲಿ ಸೇರ್ಪಡೆ ಮಾಡಲಾಗಿದೆ.
ಈ ಹಾಡನ್ನು ಪ್ರೊಫೆಸರ್ ಎಂ ಕೃಷ್ಣೆ ಗೌಡರು (ಗುಂಡಿನ ಅವಘಡ ಬಗ್ಗೆ ಸುಪ್ರ ಭಾತ ಮೂಲಕ ಹೇಳಿರುವರು, ಹಾಸ್ಯ ಚಟಾಕಿ ಸರದಾರ) ರಚಿಸಿರುವರು.
ಈ ಹಾಡಿನ ಚಿತ್ರೀಕರಣದಲ್ಲಿ ಪರುಲ್ ಯಾದವ್ ಹಾಗೂ ಅಮೂಲ್ಯ ಅವರು ಕೆಲವು ದೃಶ್ಯಗಳಲ್ಲಿ ಇರುವುವರು. ರಾಕ್ ಲೈನ್ ಸ್ಟುಡಿಯೋದಲ್ಲಿ ಇದಕ್ಕೆ ಸೆಟ್ ಸಹ ನಿರ್ಮಾಣ ಆಗಿ ಮೂರು ದಿವಸದಲ್ಲಿ 15 ರಿಂದ ಈ ಹಾಡನ್ನು ನೃತ್ಯ ನಿರ್ದೇಶಕ ಮುರಳಿ ಅವರು ಸಂಪೂರ್ಣ ಗೊಳಿಸಲಿದ್ದಾರೆ. ಬಾಬು ಖಾನ್ ಅವರು ಈ ಹಾಡಿನ ಸೆಟ್ ನಿರ್ಮಿಸಿದ್ದಾರೆ.
ಚಿತ್ರೀಕರಣ ಹಾಗೂ ಇನ್ನಿತರ ಚಟುವಟಿಗೆಗಳನ್ನು ಮುಗಿಸಿ ಕೊಂಡಿರುವ ‘ಶ್ರಾವಣಿ ಸುಬ್ರಮಣ್ಯ’ ಚಿತ್ರಕ್ಕೆ ಎರಡು ಜನಪ್ರಿಯ ವ್ಯಕ್ತಿಗಳು ಸೇರ್ಪಡೆ ಆಗಿದ್ದಾರೆ.
ಅಂದಹಾಗೆ ಪರುಲ್ ಅವರು ಈ ಹಿಂದೆ ‘ಗೋವಿಂದಯನಾಮಹ’ ಚಿತ್ರದ ನಟಿ. ಆ ಸಿನೆಮದಿಂದಲೇ ಅವರು ಜಯಪ್ರಿಯ ಆಗಿದ್ದು ಕೂಡ. ಅವರ ಪ್ಯಾರ್ ಗೆ....ಹಾಡನ್ನು ಸೀನಮಕ್ಕೆ ಅಳವಡಿಸಿದ ನಿರ್ಮಾಪಕ ಕೆ ಎ ಸುರೇಶ್ ಅವರು ಮತ್ತೆ ಅವರನ್ನೇ ಈ ಸಿನೆಮಕ್ಕೂ ಒಂದು ಹಾಡಿಗೆ ಕರೆತಂದಿದ್ದಾರೆ.
ನಿರ್ಮಾಪಕ ಸುರೇಶ್ ಅವರ ಮೂರನೇ ಚಿತ್ರ ‘ಶ್ರಾವಣಿ ಸುಬ್ರಮಣ್ಯ’ ಮಂಜು ಸ್ವರಾಜ್ ಅವರ ನಿರ್ದೇಶನದಲ್ಲಿ ತಯಾರಾಗುತ್ತಿದೆ.
ಸುರೇಶ್ ಬಾಬು ಅವರ ಛಾಯಾಗ್ರಹಣ, ಬಸವರಾಜ್ ಅವರ ಸಂಕಲನ ಇರುವ ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅಮೂಲ್ಯ ‘ಚೆಲುವಿನ ಚಿತ್ತಾರ’ ನಂತರ ನಟಿಸಿರುವ ಚಿತ್ರ. ಈ ಚಿತ್ರದ ಟ್ರೈಲರ್ ಈಗಾಗಲೇ ಬಹಳಷ್ಟು ಜನರನ್ನು ಆಕರ್ಷಿಸಿದೆ.
ಚಿತ್ರದ ಇನ್ನಿತರ ತಾರಾಗಣದಲ್ಲಿ ಆನಂತ ನಾಗ್, ತಾರಾ, ಸಾಧು ಕೋಕಿಲ, ಮಂಡ್ಯ ರಮೇಶ್, ನೀನಾಸಮ್ ಅಶ್ವಥ್ ಹಾಗೂ ಇನ್ನಿತರರು ಇದ್ದಾರೆ.
‘ಶ್ರಾವಣಿ ಸುಬ್ರಮಣ್ಯ’ ಚಿತ್ರದಲ್ಲಿ ಮುಗ್ದ ಹುಡುಗಿಯ ಪರಾಕಾಷ್ಟೆಗೆ ನಾಯಕ ಮನಸೋತು ಪ್ರೇಮಿಸುವುದು ಚಿತ್ರದ ಮೂಲ ಅಂಶ.